Saturday, 4 May 2013
ಯೋಗ ಆರೋಗ್ಯ ಶಿಬಿರ ಉದ್ಘಾಟನೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು, ಶಾಂತಿವನ ಟ್ರಸ್ಟ್ (ರಿ.) ಧರ್ಮಸ್ಥಳ ಮತ್ತು ಕಿನ್ನಿಗೋಳಿ ಸಮೀಪದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ೨೨ನೇ ಬೃಹತ್ ಯೋಗ ಆರೋಗ್ಯ ಶಿಬಿರವನ್ನು ಇತ್ತೀಚೆಗೆ ಯುಗಪುರುಷ ಸಭಾಭವನದಲ್ಲಿ ಕೊಡೆತ್ತೂರು ಭುವನಾಭಿರಾಮ ಉಡುಪರು ಉದ್ಘಾಟಿಸಿದರು. ಈ ಸಂದರ್ಭ ಉಮೇಶ್ ರಾವ್ ಎಕ್ಕಾರು, ಯೋಗ ಶಿಕ್ಷಕ ಹರಿರಾಜ್ ಕುಜಿಂಗಿರಿ, ಲತಾ ಕೆ. ಅಮೀನ್, ಶೈಲಾ ಶೆಟ್ಟಿ, ತಾರಾನಾಥ ಶೆಟ್ಟಿ, ಶಶಿಕಾಂತ ರಾವ್ ಮುಂತಾದವರಿದ್ದರು.
ಭಾರತ್ ಕೋ. ಬ್ಯಾಂಕಿನ ಸತೀಶ್ ಎನ್. ಬಂಗೇರ ಸೇವಾ ನಿವೃತ್ತಿ - ಸಂಮಾನ
ಭಾರತ್ ಕೋ. ಅಪರೇಟಿವ್ ಬ್ಯಾಂಕ್ ( ಮುಂಬಯಿ) ಲಿ. ಇಲ್ಲಿ ೩೧ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಸತೀಶ್ ಎನ್. ಬಂಗೇರ ಇವರನ್ನು ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ಸಂಮಾನಿಸಲಾಯಿತು. ಈ ಸಂದರ್ಭ ಜಯ ಸಿ. ಸುವರ್ಣ, ನಿತ್ಯಾನಂದ ಕೋಟ್ಯಾನ್, ಚಂದ್ರಶೇಖರ ಆರ್. ಮುಲ್ಕಿ, ಅನಿಲ್ಕುಮಾರ್ ಆರ್. ಅಮೀನ್, ಶೇಖರ ಪೂಜಾರಿ, ವಿವೇಕ್ ಎಸ್. ಶಾನ್ಭಾಗ್, ಶೋಭಾ ದಯಾನಂದ್, ನವೀನ್ಚಂದ್ರ ಎಸ್. ಬಂಗೇರ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಸಂತ ವೇದ ಶಿಬಿರದ ಉದ್ಘಾಟನೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಸಂಜೀವನೀ ಟ್ರಸ್ಟ್ ಮುಂಬಯಿ ಹಾಗೂ ಕಟೀಲು ಶ್ರೀ ದುರ್ಗಾ ಸಂಸ್ಕೃತ ಪ್ರತಿಷ್ಠಾನದ ಆಶ್ರಯದಲ್ಲಿ ಜರಗಿದ ವಸಂತ ವೇದ ಶಿಬಿರದ ಉದ್ಘಾಟನೆಯನ್ನು ಇತ್ತೀಚೆಗೆ ಕಟೀಲು ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕುಂಭಾಶಿ ಆನೆಗುಡ್ಡೆ ದೇವಳದ ಅನುವಂಶೀಯ ಮೊಕ್ತೇಸರ ಡಾ|| ಸೂರ್ಯನಾರಾಯಣ ಉಪಾಧ್ಯಾಯರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಕಟೀಲು ದೇವಳದ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ಹರಿನಾರಾಯಣ ಆಸ್ರಣ್ಣ, ಸಂಜೀವನೀ ಟ್ರಸ್ಟ್ನ ಡಾ|| ಸುರೇಶ್ ರಾವ್, ಡಾ|| ನಾಗರಾಜ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಡಾ|| ಪದ್ಮನಾಭ ಮರಾಠೆ ಮುಂತಾದವರು ಉಪಸ್ಥಿತರಿದ್ದರು.
ಮಕ್ಕಳ ಬೇಸಿಗೆ ಶಿಬಿರ - ಮನು ಕಶ್ಯಪ್ ಕೃತಿ ಬಿಡುಗಡೆ
ಕಟೀಲು ದೇವಳ ಹಾಗೂ ಸಂಜೀವನೀ ಟ್ರಸ್ಟ್ ಆಶ್ರಯದಲ್ಲಿ ಕಟೀಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿ ಮನು ಕಶ್ಯಪ್ ಬರೆದ "ಜ್ಞಾನಕೋಶ" ಕೃತಿಯನ್ನು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರು ಬಿಡುಗಡೆಗೊಳಿಸಿದರು. ಈ ಸಂದರ್ಭ ಡಾ|| ಸೋಂದಾ ಭಾಸ್ಕರ ಭಟ್, ವೆಂಕಟರಮಣ ಹೆಗ್ಡೆ, ವೈ. ಮಾಲತಿ, ವಾಸುದೇವ ಶೆಣೈ, ಶ್ವೇತಾ ಡಿ. ಮಾಡ, ಸರೋಜಿನಿ, ಗೋಪಾಲ ಶೆಟ್ಟಿ, ಕೃಷ್ಣ ಕೆ., ಮನು ಕಶ್ಯಪ್ ಮತ್ತಿತರರಿದ್ದರು.
ಶ್ರೀ ಕ್ಷೇತ್ರ ನೆಲ್ಲಿತೀರ್ಥದಲ್ಲಿ ಮಕ್ಕಳ ವಿಕಸನ ಶಿಬಿರ "ತಿಳಿವಿನ ತೀರ್ಥ"
ಶ್ರೀ ಕ್ಷೇತ್ರ ನೆಲ್ಲಿತೀರ್ಥದಲ್ಲಿ ಮಕ್ಕಳ ವಿಕಸನ ಶಿಬಿರ "ತಿಳಿವಿನ ತೀರ್ಥ"ವನ್ನು ಇತ್ತೀಚೆಗೆ ಶ್ರೀ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿದರು. ಈ ಸಂದರ್ಭ ಪಿ. ಸುಬ್ರಾಯ ಭಟ್, ಬಾಲಕೃಷ್ಣ ಕತ್ತಲಸಾರ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಪುರುಷೋತ್ತಮ ಕೊಟ್ಟಾರಿ, ರಾಮಚಂದ್ರ ಕಾವ, ಕೃಷ್ಣಪ್ಪ ಕರ್ಕೇರ, ಸಂಧ್ಯಾ ಭಟ್, ಪ್ರಸನ್ನ ಭಟ್, ಭಾಸ್ಕರ ನೆಲ್ಲಿತೀರ್ಥ ಮುಂತಾದವರಿದ್ದರು.
Subscribe to:
Posts (Atom)






