Saturday, 17 March 2012

ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ನಮನ ಪರಂಪರೆ ಕೃತಿಯ ಲೋಕಾರ್ಪಣೆ

ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಬಂಗವಾಡಿ ಅರಮನೆಯ ಬಿ.ರವಿರಾಜ ಬಲ್ಲಾಳರು ತುಳು ಭಾಷೆಯಲ್ಲಿ ರಚಿಸಿರುವ ನಮನ ಪರಂಪರೆ ಎಂಬ ಗ್ರಂಥವನ್ನು  ಶ್ರೀ ಧ.ಮ.ಕಾಲೇಜಿನ ಪರಂಪರೆ ಕೂಟದ ಆಶ್ರಯದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ|| ಈ. ಮಹಾಬಲ ಭಟ್ ಅವರು ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಕೃತಿಕಾರ ಬಿ.ರವಿರಾಜ ಬಲ್ಲಾಳರನ್ನು ಯುಗಪುರುಷದ ವತಿಯಿಂದ ಕೊಡೆತ್ತೂರು ಭುವನಾಭಿರಾಮ ಉಡುಪರು ಸನ್ಮಾನಿಸಿದರು.
ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ|| ವೈ.ಉಮಾನಾಥ ಶೆಣೈ ಸ್ವಾಗತಿಸಿ, ಅಂತಿಮ ಬಿ.ಎ. ವಿದ್ಯಾರ್ಥಿ ಮೋಹನ್ ಕುಮಾರ್  ಕಾರ್ಯಕ್ರಮ ನಿರ್ವಹಿಸಿದರು. ವಿವೇಕ್ ವಂದಿಸಿದರು.