ಬಾಲ ಮನೋವಿಜ್ಞಾನಿ, ಮಕ್ಕಳ ಹಿರಿಯ ಸಾಹಿತಿ ಪಳಕಳ ಸೀತಾರಾಮ ಭಟ್ಟರಿಗೆ ಇದೇ ಅಕ್ಟೋಬರ್ 9ರಂದು 80 ವರ್ಷ ತುಂಬಿದ ಸಂದರ್ಭದಲ್ಲಿ ಅವರು ರಚಿತ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಕಾಡಿನ ಕಣ್ಮಣಿ ಕೃತಿಯನ್ನು ಪುತ್ತಿಗೆ ಶ್ರೀ ಸೊಮನಾಥೇಶ್ವರ ದೇವಸ್ಥಾನದಲ್ಲಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ|| ಎಂ. ಮೋಹನ ಆಳ್ವರವರು ಬಿಡುಗಡೆಗೊಳಿಸಿದರು. ಯುಗಪುರುಷದ ವತಿಯಿಂದ ಪಳಕಳರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಂಬಾತನಯ ಮುದ್ರಾಡಿ, ಬಿ.ಚಂದ್ರಯ್ಯ, ವಿ.ಬಿ.ಅರ್ತಿಕಜೆ, ಕೆ.ಜಿ.ಮಲ್ಯ, ಶ್ರೀಮತಿ ಮತ್ತು ಶ್ರೀ ಪಳಕಳ ಸೀತಾರಾಮ ಭಟ್, ಮೂಡಬಿದ್ರೆ ಪತ್ರಕರ್ತರ ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹಾಗೂ ಪಳಕಳರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
No comments:
Post a Comment